ಆದೀತೆ!

ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ?
ಅದರಂದ ಮಕರಂದಗಳ ಸವಿದೀತೆ?
ಒಂದರ ಮಹತಿ ನಿಯತಿಗಳನರಿತೀತೆ?
ಅದರಾಗುಹೋಗುಗಳನಳೆದೀತೇ?

ಹಾಗೆ ಮಾಡಲು
ಬೆಳಗನೊಳಗೊಂಡ ಅರುಣೋದಯದಂತೆ,
ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ,
ಕೂಸು ಹೀಚಾಗಬೇಕೆನಿಸುತ್ತದೆ

ಇಲ್ಲವೇ ಹಗಲುಗನಸು ಕಂಡುಂಡು
ಕೆಂಡವಾಗಿಳಿಬಿದ್ದ ಸಂಜೆಯಂತೆ
ಮಣ್ಣಿನೊಡನಾಟದಲ್ಲಿ ಕಾಲಕಳೆವ
ಒಣ ಮರದಂತೆ
ಕಾಯಿಗಾಗಿ ಕಾಯವಳಿದು
ಬಣ್ಣವಡಗಿ ಬಾಡಿ ಬಿದ್ದೆಸಳುಗಳಾಗಿರಬೇಕೆನಿಸುತ್ತದೆ

ಇವೆರಡಕ್ಕೂ ತತ್ವ-ಅನಂತ-ಜೀವಾಂತ-ವೇದಾಂತ
ಎಂದುಬಿಟ್ಟು ಪುಸ್ತಕ ಮುಚ್ಚಲಾದೀತೆ?
(೧-೧-೭೮)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಬ್ಬ
Next post ಸೂರ್ಯನ ಕಾವು

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys